Friday, August 18, 2017

IT ಹುಡುಗನ halfತ್ಮಾ ಕಥೆ


ಇದೇನಪ್ಪ ಟೈಟ್ಲು ಹೀಗೆ ಅಂತ ತಲೆಕೆಡಿಸ್ಕೊಬೇಡಿ, IT fieldಲ್ಲಿ ಇದೆ ತರ ನಾವು ಎಲ್ಲಕ್ಕೂ ತಲೆಕೆಡಿಸಿಕೊಳ್ಳುತ್ತೇವೆ ಕೆಡೆಸಿಕೊಂಡರೆ !? ಎನ್ನುತ್ತೀರೇನು ? ಕೆಡೆಸಿಕೊಂಡರೆ ಕೆಡೆಸಿಕೊಳ್ಳಿ  ಏನು ಗೊತ್ತಾಗುವುದಿಲ್ಲ. 
ಇನ್ನು ಒಂದು ನಿವೇದನೆ ಅಲ್ಲ ಠರಾವು, ಈ ಅನಾಹುತ ಕಥೆ sorry ಆತ್ಮ ಕಥೆಯಲ್ಲಿ ವ್ಯಕ್ರಾಣ ಗೀಕ್ರಣ ಎಲ್ಲ ತಲೆಕೆಡಿಸ್ಕೊಬ್ಯಾಡಿ, ಯಾಕೆಂದ್ರೆ ಇದು SMS whats App ಕಾಲ. ವ್ಯಕ್ರಾಣ ಅಂದ್ರೆ ಗೋಕರ್ಣಕ್ಕೆ ಹೋಗಿ ಸಂಕ್ರಣ್ಣನ್ನ  ಮನೇಲಿ ಸೀಕರ್ಣೆ ತಿನ್ನೋ ಅಷ್ಟು ಸುಲ್ಬ ಅಲ್ಲ. ಸುಮ್ನೆ ಓದ್ಕೊಳಿ. 

ಇನ್ನು ಕಥೆ "ಅಂದಾನೊಂದು ಕಾಲದಲ್ಲಿ ನಾನು IT ಕಂಪನಿಲಿ ಕೆಲ್ಸಕ್ಕೆ ಸೇರಿದೆ, ಯಾಕೆ ಸೇರಿದೆ ?  ನಾನು ಇಂಜಿನಿಯರಿಂಗ್ ಓದಿದ್ದೆ ಅದ್ಕೆ ಸೇರ್ದೆ. ಇಂಜಿನಿಯರಿಂಗ್ ಯಾಕೆ ಓದಿದೆ ಸೇರ್ಸುದ್ರು ಸೇರ್ಕೊಂಡೆ...ಯಾರು ?? ತಂದೆ ತಾಯಿ ... ಹಾ.. ಇಲ್ಲಿಂದಲೇ ಕಥೆ ಶುರು..."

ನನ್ನ ಇಂದಿನ ಪರಿಸ್ಥಿತಿಯ ಕಾರಣ ಶುರುವಾಗುವುದೇ ಇಲ್ಲಿಂದ..ನಾನು ಸಣ್ಣವನಿದ್ದಾಗ ದಡ್ಡ ಮಾಸ್ತರ ಬಳಿ ಬುದ್ದಿವಂತ ಎನಿಸಿಕೊಂಡಿದ್ದೆ, ಇದೆ ನೋಡಿ ನನ್ನ ಸುದೈವ, ದುರ್ದೈವ, ವಿಧಿ, ದುರ್ವಿಧಿ.. ಯಾಕೆಷ್ಟು ಪದ ಎಂದಿರಾ ಇನ್ಯಾರನ್ನು ತಾನೇ ಹಳಿಯಲಿ ನಾನು. ಚೆನ್ನಾಗಿ ಮಾರ್ಕ್ಸು ತೆಗೆಯುವ ಚಟ ಆಗಾತಾನೆ ಶುರುವಾಗಿತ್ತು ಇದನ್ನು ತಂದೆ ತಾಯಿಯರೊಡನೆ ಇಡೀ ಸಮಾಜವೇ ಪೋಷಿಸಿತು. ಮಾರ್ಕ್ಸ್ ಕಾರ್ಡು ನಮ್ಮ ಜೀವ ನಿಯಂತ್ರಕವಾಯ್ತು, ಸಾಮಾಜಿಕ status ಆಯಿತು ನಮ್ಮನ್ನಳೆಯುವ ಅಳತೆಗೋಲೂ ಆಯಿತು. ಇನ್ನು ಮಾರ್ಕ್ಸ್ ಕಾರ್ಡ್ ಶಾಲೆ ಇಂದ ಇಡಿದು, ಇಂಜಿನಿಯರಿಂಗ್ ತನಕ ಗಳಿಸಿದೆ. ನನ್ನ ಈ ಮಾರ್ಕ್ಸ್ ಮಹಾಪರಾಧಕ್ಕಾಗಿ ಅಲ್ಲ ದುಷ್ಪರಿಣಾಮವಾಗಿ ನನಗು ಕೆಲಸ ಸಿಕ್ಕಿತು. ಎಲ್ಲಿ ಅಲ್ಲಿ  "ಎಂ.ಏನ್. ಸೀ.." ಅಲ್ಲಿಂದ  ದಡ್ಡನಂತೆ ಒಂದು IT ಪ್ರಾಣಿಯಾದೆ. 

ಆಫೀಸ್ನಲ್ಲಿ ಆಫೀಸ್ ಪ್ರಾಣಿ, ಮನೇಲಿ ಗಂಡ ಪ್ರಾಣಿ, ಅಣ್ಣ ಪ್ರಾಣಿ, ಮಗ ಪ್ರಾಣಿ, ಬಸ್ಸಿನಲ್ಲಿ ಪ್ಯಾಸೆಂಜರ್ ಪ್ರಾಣಿ, Qಗಳಲ್ಲಿ Q ಪ್ರಾಣಿ.... ಇದು ನನ್ನ ಪ್ರಸ್ತಾವನೆ. ಒಟ್ಟಿನಲ್ಲಿ ನಾನೊಬ್ಬ ನರಪ್ರಾಣಿ ಎಂದು ಯಾರಿಗೂ ಅನ್ನಿಸಿಲ್ಲ. 
ಆಫೀಸ್ನಲ್ಲಿ ನನಗೆ ಬಹಳ ಸಿಟ್ಟು, ಆಗ ಏನು ಮಾಡುತ್ತೇನೆಂದರೆ.... ಅದನ್ನು ಮನೆಗೆ ತರುತ್ತೇನೆ... ಮನೆಯಲ್ಲೂ ನನ್ನ ಸಿಟ್ಟು ನೆತ್ತಿಗೇರಿತಂದರೆ .. ಏರಿದರೆ...  ಯಾರು ಕ್ಯಾರೇ ಅನ್ನುವರಿಲ್ಲ  ?  ಇದಕ್ಕೆಲ್ಲ ಒಂದು ಪರಿಹಾರ ಹುಡುಕಿಕೊಂಡಿದ್ದೇನೆ ಅದೇನೆಂದರೆ ಸಿಟ್ಟನ್ನು ನುಂಗಿಕೊಳ್ಳುವುದು !
ಹೌದು ನುಂಗಿಕೊಳ್ಳುವುದು , ಇದನ್ನು ಬಹಳದಿಸಗಳಿಂದ ಅಭ್ಯಾಸ ಮಾಡಿದ್ದೇನೆ, ಈ ಸಿಟ್ಟೇ ಎಷ್ಟೋ ಬಾರಿ ನನ್ನ ಹೊಟ್ಟೆಗೆ ಹಿಟ್ಟಾಗುತ್ತದೆ ಕೆಲವು ಬಾರಿ ಕಣ್ಣೀರು ಜೊತೆಗೆ ಸೇರಿ ಬೇಗನೆ ಪಚನವಾಗುತ್ತದೆ ಸಿಟ್ಟು. 

ಈಗ ಅರ್ಧದಾರಿ ಕ್ರಮಿಸಿಯಾಗಿದೆ, ಏನು ಮಾಡುವುದೆಂದು ಗೊತ್ತಿಲ್ಲ ಗೊತ್ತಾದಾಗ ಇನ್ನು halfತ್ಮಾ ಹೊರಗೆಬರುತ್ತಾನೆ. 

ಅಲ್ಲಿಯವರೆಗೂ ಸ್ವಲ್ಪ whatsapp, facebookಗಳನ್ನೂ ಚೆಕ್ ಮಾಡ್ತಿರಿ. 

Friday, March 17, 2017




 

ಮಾರ್ಚ್ ೧೭ ಕನ್ನಡ ಸಾಹಿತ್ಯದ ದಿಗ್ಗಜರಾದ ಡಿ.ವಿ.ಜಿ. ಹಾಗು ಪು. ತಿ. ನ ರವರ ಜನ್ಮದಿನ.
ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಮೇಲುಕೋಟೆಯಲ್ಲಿ ೧೯೦೫ ಮಾರ್ಚ್ ೧೭ ರಂದು ಜನಿಸಿದರು, ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಜನಿಸಿದ್ದು ಮಾರ್ಚ್ 17 ೧೮೮೭ ಮುಳಬಾಗಿಲಿನಲ್ಲಿ. ಆಧ್ಯಾತ್ಮ, ಲೋಕ ನೀತಿ, ಪ್ರಕೃತಿ, ದೈವತ್ವ ಒಳಗೊಂಡಂತಹ ಸಮಾಹಿತದ ಸಾಹಿತ್ಯ ಈರ್ವರ ಸಾಹಿತ್ಯದ ಪ್ರಧಾನ ಅಂಗ. 

ಪದ್ಮ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿರುವ ಇಬ್ಬರೂ ಬರೆದಂತೆ ಬದುಕಿ ಬದುಕಿದಂತೆ ಬರೆದವರು.

ಪು.ತಿ.ನ ರವರು "ಕರ್ಮಯೋಗಿ ಡಿ.ವಿ.ಜಿ." ಎಂದು ಡಿವಿಜಿಯವರನ್ನು ಸ್ಮರಿಸಿರುವ ಪದ್ಯ.

"ಆತ್ಮದಿಂದಾತ್ಮವನು ಮೇಲಕೆತ್ತಲು ಬೇಕು
ಆತ್ಮವನು ಕೆಳಗೊತ್ತಿ ಇಡಲಾಗದು 
ಆತ್ಮವೇ ಆತ್ಮಕ್ಕೆ ನಂಟನಂತೊದಗುವುದು
ಆತ್ಮವೇ ಆತ್ಮಕ್ಕೆ ಹಗೆಯಪ್ಪುದು 

"ಯಾರು ತನ್ನನು ತಾನು ಗೆಲ್ಲುವನೋ ಆತನಿಗೆ 
ತೀರಾ ಹತ್ತಿರದ ಬಂಧುವಪ್ಪುದಾತ್ಮ 
ಯಾರು ತನ್ನೊಳಗಾತ್ಮನಿಲ್ಲದೊಲು ಬಾಳುವನೊ 
ವೈರಿಯಾತನಿಗಾತ್ಮ ತಾನಪ್ಪುದು -"

ಅಂದು ಗೀತಾಚಾರ್ಯರಿಂತೊರೆದ ಸೂಕ್ತಿಯನು 
ಇಂದು ಬಾಳೊಳು ತಂದ ಧೀರಾತ್ಮನಿವನು 
ತನ್ನಿಂದ ತಾನಿದ್ದು ತನ್ನ ಗೆದ್ದವನೀತ 
ಉನ್ನತರೋಳುನ್ನುತವನು ಪ್ರೇಮ ನಿಷ್ಠಪ್ತ 
ದೈವವನು ನಂಬಿಯೂ ಪುರುಷಪ್ರಯತ್ನವನು 
ಸೇವೆ ಎಂದೆಣಿಸಿದವ ಸತ್ಕರ್ಮಾಸಕ್ತ 

ನಕ್ಕು ನಲಿಸುವ ಸರಸಿ ಬಿಕ್ಕಿ ಮರುಗುವ ಕರುಣಿ 
ಸೊಕ್ಕಿದವರನು ತಾನು ಧಿಕ್ಕರಿಪ ಧೃತಿಮಾನ್ 
ದುಕ್ಕ ಸೊಗಗಳು ದೈವವಿಕ್ಕುವ ಹಸಾದವೆನೆ 
ದಿಕ್ಕುಗೆಡದಂದದಲಿ ತಾಳಿದ ಸಹಿಷ್ಣು 

ಕಣ್ಣೀತ ಕಿರಿಯರಿಗೆ ಹಣ್ಣು ತಾತ್ವಿಕ ಜನಕ್ಕೆ 
ತಿಣ್ಗ ಬುದ್ದಿಯ ಕುಶಲ ಹೃದಯಜೀವಿ 
ಮಣ್ಣುವಿಣ್ ಒಟ್ಟಾಗಿ ಸೃಜಿಸೀತೆ ಡಿವಿಜಿಯ 
ಕನ್ನಡವು ಸಾರಮತಿಯೀತನಿಂದೆಂಬೆ 

ನಾಡು ನುಡಿ ರೂಢಿಗಳ ತ್ರೈಮೌಲ್ಯಕಳವಡಿಸಿ 
ಹೊಸ ನೋಟ ತಂದನೀತ 
ಹಾಡು ನುತಿನತಿಗಳಿಂದರ್ಚಿಸುವುದಚ್ಚರಿಯೆ 
ಈತನಂ ಪ್ರೀತ ಜನ ಜಾತ 


Thursday, March 16, 2017

                                                                 

                                                                  ಚಿತ್ರದ ಪರಿಚಯ

ಸಾಮಾನ್ಯವಾಗಿ ಈ ಚಿತ್ರವನ್ನು ಕನ್ನಡ ಸಾಹಿತ್ಯರಸಿಕರೆಲ್ಲ ಕಂಡಿಹರು, ಇದು "ಆಲ್ ಇಂಡಿಯಾ ರೇಡಿಯೋ" ಮೈಸೂರ್ ಕೇಂದ್ರದ ಅಧಿಕಾರಿಗಳು ತಾ|| ೧೫-೮-೧೯೫೪ರ ಸಂಜೆ ಸ್ವಾತಂತ್ರ್ಯೋತ್ಸವದ ಅಂಗವಾಗಿ "ನವ್ಯ ಸಾಹಿತ್ಯ ನಿರ್ಮಾಣ" ಎಂಬ ಭಾಷಣಮಾಲೆಯನ್ನು ಏರ್ಪಡಿಸಿದ್ದರು.

ಈ ಭಾಷಣಮಾಲೆಯಲ್ಲಿ ಭಾಗವಹಿಸಿದ್ದವರು : ಸರ್ವಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ.ಗುಂಡಪ್ಪ, ಕುವೆಂಪು, ವಿ.ಸೀತಾರಾಮಯ್ಯ,  ಶಿವರಾಮ ಕಾರಂತ, ಅ. ನ. ಕೃಷ್ಣರಾಯರು ಮತ್ತು ಜೆ. ಪಿ. ರಾಜರತ್ನಂ.

ಇದರಲ್ಲಿ 'ರಾಷ್ಟ್ರಸ್ವಾತಂತ್ರ್ಯ ಮತ್ತು ಕಾವ್ಯಸ್ಪೂರ್ತಿ'ಯನ್ನು ಡಿ.ವಿ.ಜಿ. , 'ಹೊಸ ಸಾಹಿತ್ಯ ರೂಪಗಳು' ಕುರಿತು ಕಾರಂತ, 'ಸಾಹಿತ್ಯ ಮತ್ತು ವಾಸ್ತವಿಕತೆ'ಯನ್ನು ಅ.ನ.ಕೃ, 'ನವ್ಯಸಾಹಿತ್ಯದಲ್ಲಿ ನೀರೋಗ ವಿಮರ್ಶೆ'ಯಾ ಬಗ್ಗೆ ಮಾಸ್ತಿ, 'ಸಾಹಿತ್ಯ ಮತ್ತು ಲೋಕಶಾಂತಿ'ಯನ್ನು ವಿ.ಸೀ, 'ಮುಂದಿನ ಸಾಹಿತ್ಯದಲ್ಲಿ ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ'ಯನ್ನು ಕುರಿತು ಕುವೆಂಪು ಮಾತನಾಡಿದರು. ರಾಜರತ್ನಂ ಈ  ನಿರ್ದೇಶಕರಾಗಿದ್ದರು.

ಮೈಸೂರಿನ  ಕಾವ್ಯಾಲಯ ಪ್ರಕಾಶಕರು ಈ ಭಾಷಣಗಳನ್ನು "ನವ್ಯ ಸಾಹಿತ್ಯ ನಿರ್ಮಾಣ' ಎಂಬ ಹೆಸರಿನಿಂದ ಪ್ರಕಟಿಸಿದ್ದರು.